Prajadhvani TV

  • ಮುಖಪುಟ
  • ತಾಜಾ ಸುದ್ದಿ
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ಕ್ರೀಡೆ
  • ಆರೋಗ್ಯ
  • ಕ್ರೈಂ
  • ತಂತ್ರಜ್ಞಾನ
  • ಜೀವನ ಶೈಲಿ
  • ವಾಣಿಜ್ಯ
  • Home
  • Blog
  • Top News
  • 147 ರನ್​ ಟಾರ್ಗೆಟ್​ ಮುಟ್ಟಲಾಗದ ಟೀಮ್ ಇಂಡಿಯಾ.. ಸ್ವಲ್ಪ ಮಾನ ಉಳಿಸಿದ ರಿಷಬ್ ಪಂತ್!
0
prajadhvani
Monday, 04 November 2024 / Published in Top News

147 ರನ್​ ಟಾರ್ಗೆಟ್​ ಮುಟ್ಟಲಾಗದ ಟೀಮ್ ಇಂಡಿಯಾ.. ಸ್ವಲ್ಪ ಮಾನ ಉಳಿಸಿದ ರಿಷಬ್ ಪಂತ್!

ಇತಿಹಾಸದಲ್ಲೇ ಮೊದಲ ಬಾರಿಗೆ ತವರಲ್ಲಿ ಭಾರತ ವೈಟ್​ವಾಶ್​

ಭಾರತದಲ್ಲಿ ಸರಣಿ ಗೆದ್ದ ಮೊದಲ ವಿದೇಶಿ ತಂಡ ಯಾವುದು?

ಪಂದ್ಯದಲ್ಲಿ ರೋಹಿತ್ ಪಡೆಯ ಪೆವಿಲಿಯನ್ ಪರೇಡ್ ಹೇಗಿತ್ತು?

ಯಾವ ಮೈದಾನದಲ್ಲಿ ಟೀಮ್​ ಇಂಡಿಯಾ ಇತಿಹಾಸ ಸೃಷ್ಟಿಸಿತ್ತೋ, ಅದೇ ಮೈದಾನದಲ್ಲಿ ಹಿಂದೆಂದೂ ಕಾಣದಂತಹ ಮುಖಭಂಗ ಅನುಭವಿಸಿದೆ. ಭಾರತದಲ್ಲಿ ಮೊಟ್ಟ ಮೊದಲ ಬಾರಿ 3 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಟೀಮ್​ ಇಂಡಿಯಾ ವೈಟ್​ವಾಶ್​ ಮುಖಭಂಗ ಅನುಭವಿಸಿದೆ. ಗೆದ್ದ ನ್ಯೂಜಿಲೆಂಡ್​ ಇತಿಹಾಸ ಸೃಷ್ಟಿಸಿದೆ. ವಾಂಖೆಡೆ ಅಂಗಳದಲ್ಲಿ ಸಾಧಾರಣ ಟಾರ್ಗೆಟ್​ ಬೆನ್ನತ್ತುವಲ್ಲಿ ಟೀಮ್​ ಇಂಡಿಯಾ ಎಡವಿದೆ.

ತವರಿನಲ್ಲಿ ಹೀನಾಯ ಮುಖಭಂಗ.!

ಮುಂಬೈ ಟೆಸ್ಟ್​ ಪಂದ್ಯದ 2ನೇ ದಿನದಾಟದ ಅಂತ್ಯ ಬಳಿಕ ಟೀಮ್​ ಇಂಡಿಯಾ ಅಭಿಮಾನಿಗಳಲ್ಲಿ ಒಂದು ಸಮಾಧಾನ ಮೂಡಿತ್ತು. ಮೊದಲ 2 ಟೆಸ್ಟ್​ ಸೋತರೂ ಕನಿಷ್ಠ ಪಕ್ಷ ವೈಟ್​ವಾಶ್​ ಮುಖಭಂಗದಿಂದ ಪಾರಾಗೋ ಸಮಾಧಾನ ಮೂಡಿತ್ತು. ಆದ್ರೆ, 3ನೇ ದಿನದ ಆಟದಲ್ಲಿ ಆಗಿದ್ದು ಹೀನಾಯ ಮುಖಭಂಗ. 3ನೇ ದಿನದಾಟದ ಆರಂಭದಲ್ಲೇ ನ್ಯೂಜಿಲೆಂಡ್​ನ ಅಜಾಜ್​ ಪಟೇಲ್​ ಜಡೇಜಾ ಸ್ಪಿನ್​ ಬಲೆಗೆ ಬಿದ್ದರು. 174 ರನ್​ಗಳಿಗೆ ಆಲೌಟ್​ ಆದ ಕಿವೀಸ್​ ಪಡೆ ಭಾರತದ ಗೆಲುವಿಗೆ 147 ರನ್​ಗಳ ಸಾಧಾರಣ ಟಾರ್ಗೆಟ್​ ನೀಡಿತು.

147 ರನ್​ ಬಿಗ್​ ಟಾರ್ಗೆಟ್​​ ಏನಾಗಿರಲಿಲ್ಲ

ಹೋಮ್​ಗ್ರೌಂಡ್​​ನಲ್ಲಿ, ವಿಶ್ವ ಶ್ರೇಷ್ಟ ಬ್ಯಾಟ್ಸ್​ಮನ್​ಗಳ ದಂಡನ್ನೆ ಹೊಂದಿದ್ದ ಟೀಮ್​ ಇಂಡಿಯಾಗೆ 147 ರನ್​ ಬಿಗ್​ ಟಾರ್ಗೆಟ್​​ ಏನಾಗಿರಲಿಲ್ಲ. ಆದ್ರೆ, ಈ ಸೋ ಕಾಲ್ಡ್​ ವರ್ಲ್ಡ್​​ ಕ್ಲಾಸ್​ ಬ್ಯಾಟ್ಸ್​ಮನ್​ಗಳು ಪೆವಿಲಿಯನ್​ ಪರೇಡ್​ ನಡೆಸಿಬಿಟ್ಟರು. ಪೆವಿಲಿಯನ್​ ಪರೇಡ್​ಗೆ ಮುನ್ನುಡಿ ಬರೆದಿದ್ದೇ ಕ್ಯಾಪ್ಟನ್​ ರೋಹಿತ್​ ಶರ್ಮಾ. ರೋಹಿತ್​ ಶರ್ಮಾ 11 ರನ್​ ಗಳಿಸಿ ಔಟಾದ್ರೆ, ಪ್ರಿನ್ಸ್​​ ಶುಭ್​ಮನ್​ ಗಿಲ್​, ಕಿಂಗ್​ ವಿರಾಟ್​ ಕೊಹ್ಲಿ ಒಂದು ರನ್​ಗಳಿಸುವಷ್ಟರಲ್ಲೇ ಸುಸ್ತಾದರು. ಇವರ ಹಿಂದೆ ಯಶಸ್ವಿ ಜೈಸ್ವಾಲ್​ ಕೂಡ ಡಗೌಟ್​ಗೆ ದೌಡಾಯಿಸಿದರು.

ಇನ್ನು ಹೋಮ್​​ಗ್ರೌಂಡ್​ ವಾಂಖೆಡೆಯಲ್ಲಿ ಮನೆ ಮಗ​​ ಸರ್ಫರಾಜ್​ ಖಾನ್​ ಕೂಡ 1 ರನ್​​ಗಳಿಸಿ ನಿರ್ಗಮಿಸಿದರು. ಆಲ್​​ರೌಂಡರ್ ರವೀಂದ್ರ​​ ಜಡೇಜಾ ಬಂದಷ್ಟೇ ವೇಗವಾಗಿ ಪೆವಿಲಿಯನ್​ ಸೇರಿದರು.

ಮಾನ ಉಳಿಸಿದ ‘ಫೈಟರ್’​ ರಿಷಬ್​ ಪಂತ್​.!

ಹೀನಾಯ ಸೋಲಿನ ನಡುವೆ ಸ್ವಲ್ಪ ಮಟ್ಟಿಗೆ ಮಾನ ಉಳಿದಿದೆ ಅಂದ್ರೆ ಅದಕ್ಕೆ ಕಾರಣ ರಿಷಬ್​ ಪಂತ್​. 28 ರನ್​ಗೆ 4 ವಿಕೆಟ್​ ಕಳೆದುಕೊಂಡ ಸಂದರ್ಭದಲ್ಲಿ ಕಣಕ್ಕಿಳಿದ ಫೈಟರ್​ ಪಂತ್​​, ಹೋರಾಟ ನಡೆಸಿದರು. ನ್ಯೂಜಿಲೆಂಡ್​ ಬೌಲರ್​ಗಳ ದಾಳಿಗೆ ಕೌಂಟರ್​ ಅಟ್ಯಾಕ್​ ನಡೆಸಿದ ಪಂತ್​ 9 ಬೌಂಡರಿ, 1 ಸಿಕ್ಸರ್​ ಸಿಡಿಸಿ ಹಾಫ್​ ಸೆಂಚುರಿ ಪೂರೈಸಿದರು. 64 ರನ್​ಗಳಿಸಿ ಗೆಲುವಿನ ಭರವಸೆ ಮೂಡಿಸಿದ್ದ ಪಂತ್​, ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ಇದ್ರೊಂದಿಗೆ ಗೆಲುವಿನ ಕನಸೂ ನುಚ್ಚು ನೂರಾಯಿತು.

ಅಶ್ವಿನ್​ ಆಟ 8 ರನ್​ಗಳಿಗೆ ಅಂತ್ಯವಾದ್ರೆ, ಆಕಾಶ್​ ದೀಪ್​ ಮೊದಲ ಎಸೆತದಲ್ಲೇ ಕ್ಲೀನ್​ಬೋಲ್ಡ್​ ಆದ್ರು. ಸುಂದರ್​ 12 ರನ್​ಗಳಿಸಿ ಔಟಾಗೋದ್ರೊಂದಿಗೆ ಟೀಮ್​ ಇಂಡಿಯಾ ಆಲೌಟ್​ ಆಯಿತು.

ವಿಶ್ವ ಶ್ರೇಷ್ಠ ಆಟಗಾರರನ್ನ ಹೊಂದಿರೋ ವಿಶ್ವ ಶ್ರೇಷ್ಠ ತಂಡ ಕೇವಲ 147 ರನ್​ಗಳ ಗುರಿ ಬೆನ್ನತ್ತಲಾಗದೇ ಆಲೌಟ್​ ಆಗಿ 25 ರನ್​ ಅಂತರದಲ್ಲಿ ಸೋಲಿಗೆ ಶರಣಾಯಿತು. ಇತಿಹಾಸದಲ್ಲೇ ಮೊದಲ ಬಾರಿ ತವರಿನಲ್ಲಿ 3 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ವೈಟ್​ವಾಶ್​ ಮುಖಭಂಗ ಅನುಭವಿಸಿದ ಅಪಖ್ಯಾತಿಗೆ ರೋಹಿತ್​ ಪಡೆ ಗುರಿಯಾಯಿತು. 3-0 ಅಂತರದಲ್ಲಿ ಸರಣಿ ಗೆದ್ದ ನ್ಯೂಜಿಲೆಂಡ್​​, ಭಾರತದ ನೆಲದಲ್ಲಿ ಸರಣಿ ಗೆದ್ದ ಮೊದಲ ವಿದೇಶಿ ತಂಡ ಅನ್ನೋ ದಾಖಲೆ ಬರೆಯಿತು.

What you can read next

ಗೃಹಲಕ್ಷ್ಮಿ ಹಣದಿಂದ ಖಾರ ಪುಡಿ ಮಾಡೋ ಯಂತ್ರ ಖರೀದಿಸಿದ ಮಹಿಳೆ!
ಓಮ್ನಿ ಕಾರಿಗೆ ತಗುಲಿದ ಬೆಂಕಿ.. ಕಾರಿನಲ್ಲೇ ವ್ಯಾಪಾರಿ ಸಜೀವ ದಹನ
ದಿನಕ್ಕೆ 100 ಸಿಗರೇಟ್! ಕೊನೆಗೂ ಧೂಮಪಾನ ತ್ಯಜಿಸಿದ ಶಾರುಖ್​ ಖಾನ್​.. ಅಷ್ಟಕ್ಕೂ ಏನಾಯ್ತು ಗೊತ್ತಾ?

Leave a Reply Cancel reply

Your email address will not be published. Required fields are marked *

Recent Posts

  • ಹೊಸ ‘ಆರೋಗ್ಯ ಸೇವೆ’ ಘೋಷಿಸಿದ ನೀತಾ ಅಂಬಾನಿ; ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಿಸುತ್ತೆ ಈ ವಿಷಯ..!
  • ಹೊಟ್ಟೆಗೆ ಏನು ತಿನ್ನಬೇಕು.. ಮನೆ ಊಟ ಕೂಡ ಎಲ್ಲಾ ಕಾಲಕ್ಕೂ ಆರೋಗ್ಯಕರವಲ್ಲ; ICMR ಶಾಕಿಂಗ್​ ವರದಿ!
  • ಮಕ್ಕಳಿಗೆ ಟೈಫಾಯಿಡ್ ಜ್ವರ​ ಕಾಡಲು ಇವೇ ಪ್ರಮುಖ ಕಾರಣಗಳು! ಮಳೆಗಾಲದಲ್ಲಿರಲಿ ಹೆಚ್ಚು ಎಚ್ಚರ
  • ಒಂಟಿ ಕಾಲಿನ ಮೇಲೆ ನಿಲ್ಲಿ ನಿಮ್ಮ ಆಯಸ್ಸು ಹೆಚ್ಚಿಸಿಕೊಳ್ಳಿ.. ಈ ಯೋಗ ಎಷ್ಟು ಉಪಯುಕ್ತ ಗೊತ್ತಾ? ತಪ್ಪದೇ ಓದಿ!
  • ಡಯಾಬಿಟೀಸ್​ ತಡೆಯಲು ಇದೆ ಸರಳ ದಾರಿ; ನಿಮ್ಮ ಮಗುವಿಗೆ ಆರಂಭಿಕ 1000 ದಿನ ಈ ಆಹಾರ ನೀಡಬೇಡಿ

Recent Comments

No comments to show.

Categories

  • Arogya
  • Big Boss
  • Campus
  • cinema
  • Desha
  • Life Style
  • Rajakiya
  • Rajya
  • Sports
  • Tech
  • Top News
  • Tv News
  • Uncategorized
  • Videsha

Recent Posts

  • ಹೊಸ ‘ಆರೋಗ್ಯ ಸೇವೆ’ ಘೋಷಿಸಿದ ನೀತಾ ಅಂಬಾನಿ; ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಿಸುತ್ತೆ ಈ ವಿಷಯ..!

    0 comments
  • ಹೊಟ್ಟೆಗೆ ಏನು ತಿನ್ನಬೇಕು.. ಮನೆ ಊಟ ಕೂಡ ಎಲ್ಲಾ ಕಾಲಕ್ಕೂ ಆರೋಗ್ಯಕರವಲ್ಲ; ICMR ಶಾಕಿಂಗ್​ ವರದಿ!

    0 comments
  • ಮಕ್ಕಳಿಗೆ ಟೈಫಾಯಿಡ್ ಜ್ವರ​ ಕಾಡಲು ಇವೇ ಪ್ರಮುಖ ಕಾರಣಗಳು! ಮಳೆಗಾಲದಲ್ಲಿರಲಿ ಹೆಚ್ಚು ಎಚ್ಚರ

    0 comments
  • ಒಂಟಿ ಕಾಲಿನ ಮೇಲೆ ನಿಲ್ಲಿ ನಿಮ್ಮ ಆಯಸ್ಸು ಹೆಚ್ಚಿಸಿಕೊಳ್ಳಿ.. ಈ ಯೋಗ ಎಷ್ಟು ಉಪಯುಕ್ತ ಗೊತ್ತಾ? ತಪ್ಪದೇ ಓದಿ!

    0 comments
  • ಡಯಾಬಿಟೀಸ್​ ತಡೆಯಲು ಇದೆ ಸರಳ ದಾರಿ; ನಿಮ್ಮ ಮಗುವಿಗೆ ಆರಂಭಿಕ 1000 ದಿನ ಈ ಆಹಾರ ನೀಡಬೇಡಿ

    0 comments

Recent Comments

    Archives

    • November 2024
    • October 2024

    Meta

    • Log in
    • Entries feed
    • Comments feed
    • WordPress.org
    ©2024 Prajadhvani tv . All Rights Reserved | Designed & Developed By Adyasoft Technologies Inc.
    • ಮುಖಪುಟ
    • ತಾಜಾ ಸುದ್ದಿ
    • ರಾಜ್ಯ
    • ದೇಶ
    • ವಿದೇಶ
    • ರಾಜಕೀಯ
    • ಮನರಂಜನೆ
    • ಕ್ರೀಡೆ
    • ಆರೋಗ್ಯ
    • ಕ್ರೈಂ
    • ತಂತ್ರಜ್ಞಾನ
    • ಜೀವನ ಶೈಲಿ
    • ವಾಣಿಜ್ಯ
    TOP