Prajadhvani TV

  • ಮುಖಪುಟ
  • ತಾಜಾ ಸುದ್ದಿ
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ಕ್ರೀಡೆ
  • ಆರೋಗ್ಯ
  • ಕ್ರೈಂ
  • ತಂತ್ರಜ್ಞಾನ
  • ಜೀವನ ಶೈಲಿ
  • ವಾಣಿಜ್ಯ
  • Home
  • Blog
  • Tv News
  • ರೈತರ ಭೂಮಿ ಮೇಲೆ ವಕ್ಫ್​ ಕಣ್ಣು ಹಾಕಿತಾ..? ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಹೇಳಿದ್ದೇನು?
0
prajadhvani
Wednesday, 30 October 2024 / Published in Tv News

ರೈತರ ಭೂಮಿ ಮೇಲೆ ವಕ್ಫ್​ ಕಣ್ಣು ಹಾಕಿತಾ..? ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಹೇಳಿದ್ದೇನು?

  • ಅಹೋರಾತ್ರಿ ರಸ್ತೆ ಮೇಲೆ ಅಡುಗೆ ಮಾಡಿ, ಊಟ ಮಾಡಿ ಪ್ರತಿಭಟನೆ
  • ಡಿಸಿ ಕಚೇರಿ ಆವರಣದಲ್ಲಿ ದೀಪ ಬೆಳಗಿಸಿ ಅನ್ನದಾತರು ಹೇಳಿದ್ದೇನು?
  • ನಾನು ಹಿಂದೂಸ್ಥಾನಿ, ಕನ್ನಡಿಗ ಆ ಮೇಲೆ ಮುಸ್ಲಿಂ- ಸಚಿವ ಜಮೀರ್

ರಾಜ್ಯದಲ್ಲಿ ಉಪಸಮರದ ಮಧ್ಯೆ ವಕ್ಫ್ ಸಂಘರ್ಷ ತಾರತಕ್ಕೇರಿದೆ. ರೈತರ ಭೂಮಿಯನ್ನು ಕಬಳಿಸುತ್ತಿರುವ ಆರೋಪ ಕೇಳಿಬಂದಿದ್ದು ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ. ವಿಜಯಪುರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಹೋರಾತ್ರಿ ಕೈಗೊಂಡಿರುವ ರೈತರು ಧರಣಿ ಸತ್ಯಾಗ್ರಹ ನಡೆಸಿದ್ದಾರೆ.

ಬಿಜೆಪಿ ನಾಯಕರ ಜೊತೆ ರೈತ ಮುಖಂಡರ ಸತ್ಯಾಗ್ರಹ. ರಸ್ತೆ ಮೇಲೆ ಅಡುಗೆ ಮಾಡಿ, ಊಟ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ವಿಜಯಪುರದಲ್ಲಿ ರೈತರ ಧರಣಿ ಸತ್ಯಾಗ್ರಹ ನಡೆಸಿದ ಪರಿ ಇದಾಗಿದೆ.

ಡಿಸಿ ಕಚೇರಿ ಎದುರು ಧರಣಿ.. ಕರಾಳ ದೀಪಾವಳಿ!

ವಿಜಯಪುರ ಜಿಲ್ಲೆಯ ರೈತರ ಜಮೀನಿನ ಪಹಣಿಗಳ ಕಾಲಂ ನಂ.11ರಲ್ಲಿ ವಕ್ಫ್​ ಆಸ್ತಿ ಎಂದು ನಮೂದು ಮಾಡಿರೋದನ್ನು ವಿರೋಧಿಸಿ ಅನ್ನದಾತರ ಪಿತ್ತ ನೆತ್ತಿಗೇರಿದೆ. ರೈತ ಮುಖಂಡರ ನೇತೃತ್ವದಲ್ಲಿ ಅಖಾಡಕ್ಕಿಳಿದ ಅನ್ನದಾತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಾತ್ರಿ ದೀಪಗಳನ್ನು ಬೆಳಗಿಸುವ ಮೂಲಕ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹಾಗೂ ಬಿಜೆಪಿ ಮುಖಂಡ ಉಮೇಶ್ ಕಾರಜೋಳ ಪ್ರತಿಭಟನೆಗೆ ಸಾಥ್ ನೀಡಿದರು.

ಪ್ರತಿಭಟನಾ ಮೆರವಣಿಗೆ ಮೂಲಕ ಬಂದು ಡಿಸಿ ಕಚೇರಿ ಆವರಣದಲ್ಲಿ ಸೇರಿದ ರೈತರು ರಸ್ತೆಯಲ್ಲೇ ದೀಪಗಳನ್ನು ಬೆಳಗಿಸಿದರು. ಇದು ರೈತರ ಪಾಲಿಗೆ ಕರಾಳ ದೀಪಾವಳಿ ಅಂತ ಆಕ್ರೋಶ ವ್ಯಕ್ತಪಡಿಸಿ, ಅಹೋರಾತ್ರಿ ಧರಣಿ ನಡೆಸಿದರು. ರಸ್ತೆ ಮೇಲೆ ಅಡುಗೆ ತಯಾರಿಸಿ ಊಟ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ನೀಡಿರುವ ನೋಟಿಸ್ ವಾಪಸ್ ಪಡೀಬೇಕು, ಸರ್ಕಾರ ರೈತರ ವಿರುದ್ಧ ಬರಬಾರದು ಅಂತ ರೈತ ಮುಖಂಡರು ಕಿಡಿಕಾರಿದ್ದಾರೆ.

ನಮ್ಮ ಪಾಲಿಗೆ ದೀಪಾವಳಿ ಹಬ್ಬ ಇಲ್ಲ, ದೀಪಾವಳಿ ಕರಾಳ ದೀಪಾವಳಿ ಆಗಿದೆ. ಇಲ್ಲೇ ದೀಪಗಳನ್ನು ಬೆಳಗಿಸಿ ದೀಪಾವಳಿ ಮಾಡಿದ್ದೇವೆ. ಅಹೋರಾತ್ರಿ ಧರಣಿ ಮಾಡುತ್ತಿದ್ದೇವೆ. ಯಾರು ಹೇಳಿದರು ಈ ಹೋರಾಟ ಹಿಂದಕ್ಕೆ ತೆಗೆದುಕೊಳ್ಳಲ್ಲ. ಸರ್ಕಾರ ತನ್ನ ಮೊಂಡುತನವನ್ನು ಮುಂದುವರೆಸಬಾರದು.

ರೈತರಿಗೆ ಕೊಟ್ಟಿರುವ ನೋಟಿಸ್​ ಹಿಂಪಡೆಯುವುದಾಗಿ ಸ್ಪಷ್ಟನೆ

ರೈತರ ಭೂಮಿಯ ಮೇಲೆ ವಕ್ಫ್​ ಕಣ್ಣು ಹಾಕಿದ್ದು, ಕಬಳಿಸಲು ಹುನ್ನಾರ ಮಾಡಿದೆ. ಇದರಲ್ಲಿ ಸರ್ಕಾರದ ಕೈವಾಡ ಇದೆ ಎಂದು ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ, ಯಾವ ರೈತರನ್ನೂ ಒಕ್ಕಲೆಬ್ಬಿಸಲ್ಲ. ನೋಟಿಸ್​ ಹಿಂಪಡೆಯುತ್ತೇವೆ ಎಂದಿದ್ದರು. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ ಭೂಬಾಲನ್, 124 ನೋಟಿಸ್ ಕೊಟ್ಟಿದ್ದೇವೆ, ಅದನ್ನ ವಾಪಸ್ ಪಡೆಯುತ್ತೇವೆ. ಹಾಗೂ ಪಹಣಿಯ ಕಾಲಂ ನಂಬರ್ 11ರಲ್ಲಿ ಸೇರ್ಪಡೆಯಾದ ವಕ್ಫ್ ಹೆಸರು ತೆಗೆದ ಪಹಣಿ ಸಿಗಲಿದೆ ಎಂದು ಭರವಸೆ ನೀಡಿದ್ದಾರೆ.

‘ರೈತರನ್ನು ಒಕ್ಕಲೆಬ್ಬಿಸಲ್ಲ’

ಯಾವ ರೈತರನ್ನು ಕೂಡ ಒಕ್ಕಲೆಬ್ಬಿಸಲ್ಲ. ರೈತರಿಗೆ ಒಂದು ವೇಳೆ ನೋಟಿಸ್ ಕೊಟ್ಟಿದ್ದರೇ ವಾಪಸ್ ಪಡೆದುಕೊಳ್ಳುತ್ತೇವೆ.

ಸಿದ್ದರಾಮಯ್ಯ, ಸಿಎಂ

‘ನೋಟಿಸ್​ ವಾಪಸ್ ಪಡೆಯುತ್ತೇವೆ’

ನ್ಯಾಯಾಲಯ ಕೆಲವೊಂದು ಕಾಲಂಗಳಲ್ಲಿ ನೋಟಿಸ್ ಕೊಟ್ಟು ಮೊದಲು ಮಾತನಾಡಬೇಕು ಎಂದು ಹೇಳಿದೆ. ಆ ಒಂದು ವಿಚಾರವನ್ನು ಎಲ್ಲರಿಗೂ ಹೇಳಿದ್ದೇವೆ. ಮಿಸ್​ ಕಮುನಿಕೇಷನ್​ನಿಂದ ಇಂಡಿ ತಹಾಶೀಲ್ದಾರ್ ಅವರು 41 ಆಸ್ತಿಗೆ ಸಂಬಂಧ ಪಟ್ಟಂತೆ ನೋಟಿಸ್ ಕೊಟ್ಟಿದ್ದಾರೆ.

What you can read next

Bypoll; ಜಿ.ಟಿ ದೇವೇಗೌಡ, ಹೆಚ್​.ಡಿ ರೇವಣ್ಣಗೆ ಬಿಗ್ ಶಾಕ್ ಕೊಟ್ಟ ಜೆಡಿಎಸ್
18 ಕೋಟಿಗೆ ಡೀಲ್! LSG ಉಳಿಸಿಕೊಂಡ ಮೊದಲ ಸ್ಟಾರ್ ಹೆಸರು ರಿವೀಲ್, ರಾಹುಲ್ ಅಲ್ಲ..!
ಸ್ಮೃತಿ ಮಂದಾನ ಸೆಂಚುರಿ.. ಕಿವೀಸ್ ವಿರುದ್ಧ ಸರಣಿ ಗೆದ್ದ ಟೀಮ್ ಇಂಡಿಯಾ

Leave a Reply Cancel reply

Your email address will not be published. Required fields are marked *

Recent Posts

  • ಹೊಸ ‘ಆರೋಗ್ಯ ಸೇವೆ’ ಘೋಷಿಸಿದ ನೀತಾ ಅಂಬಾನಿ; ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಿಸುತ್ತೆ ಈ ವಿಷಯ..!
  • ಹೊಟ್ಟೆಗೆ ಏನು ತಿನ್ನಬೇಕು.. ಮನೆ ಊಟ ಕೂಡ ಎಲ್ಲಾ ಕಾಲಕ್ಕೂ ಆರೋಗ್ಯಕರವಲ್ಲ; ICMR ಶಾಕಿಂಗ್​ ವರದಿ!
  • ಮಕ್ಕಳಿಗೆ ಟೈಫಾಯಿಡ್ ಜ್ವರ​ ಕಾಡಲು ಇವೇ ಪ್ರಮುಖ ಕಾರಣಗಳು! ಮಳೆಗಾಲದಲ್ಲಿರಲಿ ಹೆಚ್ಚು ಎಚ್ಚರ
  • ಒಂಟಿ ಕಾಲಿನ ಮೇಲೆ ನಿಲ್ಲಿ ನಿಮ್ಮ ಆಯಸ್ಸು ಹೆಚ್ಚಿಸಿಕೊಳ್ಳಿ.. ಈ ಯೋಗ ಎಷ್ಟು ಉಪಯುಕ್ತ ಗೊತ್ತಾ? ತಪ್ಪದೇ ಓದಿ!
  • ಡಯಾಬಿಟೀಸ್​ ತಡೆಯಲು ಇದೆ ಸರಳ ದಾರಿ; ನಿಮ್ಮ ಮಗುವಿಗೆ ಆರಂಭಿಕ 1000 ದಿನ ಈ ಆಹಾರ ನೀಡಬೇಡಿ

Recent Comments

No comments to show.

Categories

  • Arogya
  • Big Boss
  • Campus
  • cinema
  • Desha
  • Life Style
  • Rajakiya
  • Rajya
  • Sports
  • Tech
  • Top News
  • Tv News
  • Uncategorized
  • Videsha

Recent Posts

  • ಹೊಸ ‘ಆರೋಗ್ಯ ಸೇವೆ’ ಘೋಷಿಸಿದ ನೀತಾ ಅಂಬಾನಿ; ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಿಸುತ್ತೆ ಈ ವಿಷಯ..!

    0 comments
  • ಹೊಟ್ಟೆಗೆ ಏನು ತಿನ್ನಬೇಕು.. ಮನೆ ಊಟ ಕೂಡ ಎಲ್ಲಾ ಕಾಲಕ್ಕೂ ಆರೋಗ್ಯಕರವಲ್ಲ; ICMR ಶಾಕಿಂಗ್​ ವರದಿ!

    0 comments
  • ಮಕ್ಕಳಿಗೆ ಟೈಫಾಯಿಡ್ ಜ್ವರ​ ಕಾಡಲು ಇವೇ ಪ್ರಮುಖ ಕಾರಣಗಳು! ಮಳೆಗಾಲದಲ್ಲಿರಲಿ ಹೆಚ್ಚು ಎಚ್ಚರ

    0 comments
  • ಒಂಟಿ ಕಾಲಿನ ಮೇಲೆ ನಿಲ್ಲಿ ನಿಮ್ಮ ಆಯಸ್ಸು ಹೆಚ್ಚಿಸಿಕೊಳ್ಳಿ.. ಈ ಯೋಗ ಎಷ್ಟು ಉಪಯುಕ್ತ ಗೊತ್ತಾ? ತಪ್ಪದೇ ಓದಿ!

    0 comments
  • ಡಯಾಬಿಟೀಸ್​ ತಡೆಯಲು ಇದೆ ಸರಳ ದಾರಿ; ನಿಮ್ಮ ಮಗುವಿಗೆ ಆರಂಭಿಕ 1000 ದಿನ ಈ ಆಹಾರ ನೀಡಬೇಡಿ

    0 comments

Recent Comments

    Archives

    • November 2024
    • October 2024

    Meta

    • Log in
    • Entries feed
    • Comments feed
    • WordPress.org
    ©2024 Prajadhvani tv . All Rights Reserved | Designed & Developed By Adyasoft Technologies Inc.
    • ಮುಖಪುಟ
    • ತಾಜಾ ಸುದ್ದಿ
    • ರಾಜ್ಯ
    • ದೇಶ
    • ವಿದೇಶ
    • ರಾಜಕೀಯ
    • ಮನರಂಜನೆ
    • ಕ್ರೀಡೆ
    • ಆರೋಗ್ಯ
    • ಕ್ರೈಂ
    • ತಂತ್ರಜ್ಞಾನ
    • ಜೀವನ ಶೈಲಿ
    • ವಾಣಿಜ್ಯ
    TOP